ವೃಷ್ಟಿ

ಮತ ಕೊಡುವಾಗ
ನನ್ನ ಮತ ಬೇಡವೆಂದಿತ್ತ
ಮುಂಗಾರು ಒಳನುಗ್ಗಿ
ಸಿಡಿದೆದ್ದು ಮುರಿದಿದ್ದ
ಮನಮಂದಿರದ ಬಾಗಿಲನು ಜಗ್ಗಿ
ಕಿಟಕಿಯ ಬಿಸಿಲುಗನ್ನಡಿಯೊಳಗಿನ
ತಂಪನು ಘಾಸಿಗೊಳಿಸಿ
ಅಂತರಂಗದಲಿ ದಶಮಾನಗಳಿಂದಲು
ಒಳಿತು ಕೆಡುಕುಗಳ ಅರಿವು
ಬಂದಂದಿನಿಂದಲು
ಸೃಷ್ಟಿಯಾದ,
ಉದ್ದಗಲಕೆ ಬೆಳೆದ ಒಂದು ಸುಂದರ
ಮನೋಹರ ಪ್ರತಿಮೆ
ಕೆಡವಿ ನೆಲಸಮವಾದುದರ
ಅನುಭವ ನಿತ್ಯ ಸತ್ಯವಾಗಿ;
ಭ್ರಷ್ಟ ವೃಷ್ಟಿಯು ಇಂದು
ಏಕೋ ಅತಿಯಾಗಿ
ನರನ ಹರ್ಷದ ರೇಖೆ
ಒಂದು ಕತೆಯಾಗಿ
ನಾಲ್ದೆಸೆಗೂ ಹಬ್ಬಿ
ಭೂ-ವ್ಯೋಮಗಳ ನಡುವಿನ
ಅಳೆಯಲಾರದ ಅಂತರವನು
ಕಾರ್ಮೋಡಗಳಿಂದ ಅಳೆದು
ಮೇಘಗರ್ಜನೆಯಿಂದ
ನನ್ನೆದೆಯನು ತತ್ತರಿಸಿ ಒಡೆದು;
ನರನಿಂದು ಹುಂಬ
ಮನುಷ್ಯನೂ ಸಿಂಹನೂ ಆಗಿರದೆ
ತನ್ನ ಗರಜಿಗೆ ತಾನಗೆಟ್ಟು
ಕುಣಿಯುವ ಡೊಂಬ
ಎಂಬ ಧ್ಯಾನವನ್ನು ಮೂಡಿಸಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆತ್ತು ಹೊತ್ತಾದರೂ
Next post ಜೀವೋಪಯೋಗವಿಲ್ಲದ ಅವಯವವುಂಟೇ ?

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys